ಅವಳು ಕಣ್ಣ ತೆರೆದಳು ಮೆಲ್ಲಗೆ
ಮೂಲೆ ಮೂಲೆ ಮೈಮುರಿದೆದ್ದಳು
ಹೊಂಗದಿರ ಪೊರಕೆಯಿಂದ ಸಂದು ಗೊಂದುಗಳ
ಝಾಡಿಸಿ ಕತ್ತಲು ಕಸ ಗುಡಿಸಿದಳು
ಮೂಡಲ ಬಾಗಿಲ ತೆರೆದು ಇರುಳ ಹೊದಿಕೆಯನೋಸರಿಸಿ
ತನ್ನಿನಿಯನ ಮೈತಟ್ಟಿ ಎಬ್ಬಿಸಿದಳು ಕಣ್ಣ ತೆರೆಸಿದಳು
ಗಾಳಿಯೂದಿನಕಡ್ಡಿಯ ಪರಿಮಳವೆಲ್ಲೆಡೆ
ಕುಂಕುಮದೋಕುಳಿಯ ಚಳೆ ಅಂಗಳಕೆ
ಬಣ್ಣ ಬಣ್ಣದ ಗೆರೆ ಮೋಡಿಯಿಂದ ರಂಗೋಲಿ ಹಾಕಿದಳು
ಚಿಕ್ಕೆ ಹೂಗಳನುದುರಿಸಿ ಹಸಿರುಡಿಯಲ್ಲಿ ತುಂಬಿಕೊಂಡಳು
ಪರಚಿಂತನ ಜಲದಿ ಮೈತೊಳೆದು
ನಿತ್ಯನೂತನ ಬಿಳಿ ಮಡಿಯುಟ್ಟು
ಅರಳಿದ ಸುಮನಗಳ ತಲೆಯಲ್ಲಿಟ್ಟುಕೊಂಡಳು
ಸೋರೆಕಾಯ ತಂತಿಗಳ ಮೀಟಿ ಮೀಟಿ
ಝೇಂಕರಿಸಿ ರಸರಂಜನೆಯಲ್ಲಿ ಎದೆದುಂಬಿ
ಕಂಠಕೇಸರ ದಾಟಿ ಜೇನುರಾಗ ಹೊಮ್ಮಿ
ಹೊರಮೊರೆಯುವಂತೆ ಹಾಡಿದಳು
ಗುಡಿಗಂಟೆ ಗಿಡಗಂಟೆಗಳ ಚಿಲಿಪಿಲಿ ಗೆಜ್ಜೆದನಿಗೆ
ಓಹೋ ಏನವಳ ನರ್ತನ
ಎಲ್ಲಿಡೆಯಲಿ ಮಧುರಂ ಮಧುರಂ ಸಂಕೀರ್ತನ
*****
Related Post
ಸಣ್ಣ ಕತೆ
-
ಧನ್ವಂತರಿ
ಡಾ|| ಕೃಷ್ಣ ಪ್ರಸಾದ್ ಮೂಲತಃ ದಕ್ಷಿಣ ಕನ್ನಡ ಜಿಲ್ಲೆಯವರು. ಅವರು ಯಾದಗಿರಿ ಜಿಲ್ಲೆ ಸುರಪುರ ತಾಲ್ಲೂಕಿನ ಕೆಂಭಾವಿಯಲ್ಲಿ ಬಂದು ನೆಲೆಸಿರುವುದೂ ಒಂದು ಆಕಸ್ಮಿಕವೇ. ಒಂದು ದಿನ ತಮ್ಮ… Read more…
-
ದೇವರು
ನನ್ನ ದೇವರಿಗೆ, ಬಹಳ ದಿನಗಳ ನಂತರ ನಿಮಗೆ ಕಾಗದ ಬರೆಯುತ್ತಿದ್ದೇನೆ. ಏಕೆಂದರೆ ನೀವು ಬರೆದ ಕಾಗದಕ್ಕೆ ಉತ್ತರ ಕೇಳಿದ್ದೀರಿ. ನಾನೀಗ ಉತ್ತರ ಬರೆಯಲೇಬೇಕು ಬರೆಯುತ್ತಿದ್ದೇನೆ. "ಪತಿಯೇ ದೇವರು"… Read more…
-
ಕಳ್ಳನ ಹೃದಯಸ್ಪಂದನ
ಅದು ಅಪರಾತ್ರಿ ೨ ಘಂಟೆ ಸಮಯ. ಎಲ್ಲರೂ ಗಾಢ ನಿದ್ರೆಯಲ್ಲಿದ್ದರು. ಊರಿನಿಂದ ಸ್ವಲ್ಪ ದೂರವಾಗಿದ್ದ ಕಲ್ಯಾಣ ನಗರದ ಬಡಾವಣೆ, ಅಷ್ಟಾಗಿ ಹತ್ತಿರ ಹತ್ತಿರವಲ್ಲದ ಮನೆಗಳು, ಒಂದು ವರ್ಷದ… Read more…
-
ಒಂದು ಹಿಡಿ ಪ್ರೀತಿ
ತೆಂಗಿನ ತೋಟದಲ್ಲಿ ಬಾಗಿಕೊಂಡು ಹಣ್ಣಾಗಿ ಉದುರಿದ ಅಡಕೆಗಳನ್ನು ಒಂದೊಂದಾಗಿ ಹೆಕ್ಕಿ, ಸನಿಹದಲ್ಲಿದ್ದ ಪ್ಲಾಸ್ಟಿಕ್ ಚೀಲಕ್ಕೆ ತುಂಬಿಸುತ್ತಿದ್ದಂತೆ ಪಕ್ಕದಲ್ಲಿ ಸರಕ್ಕನೆ ಹರಿದು ಹೋದ ಕೇರೆ ಹಾವಿನಿಂದಾಗಿ ಒಮ್ಮೆ ವಿಚಲಿತರಾದರು… Read more…
-
ಮೌನರಾಗ
ಇಪ್ಪತ್ತೊಂಬತ್ತು ದಾಟಿ ಮೂವತ್ತಕ್ಕೆ ಕಾಲಿರಿಸುತ್ತಿದ್ದ ಸುಧೀರ್ ಮದುವೆಯ ಬಗ್ಗೆ ತಾಯಿ ಸೀತಮ್ಮ, ತಂದೆ ರಂಗರಾವ್ ಅವರಿಗೆ ಬಹಳ ಕಾತುರವಿತ್ತು. ಹೆಣ್ಣುಗಳನ್ನು ಸಂದರ್ಶಿಸಲು ಒಪ್ಪದೇ ಇದ್ದ ಸುಧೀರನ ಮನೋ… Read more…